ಬೆಂಗಳೂರು : ನಗರ ಕೇಂದ್ರ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷರು ಹಾಗೂ ಯುವ ಮುಖಂಡರಾದ ಜಿ.ಜನಾರ್ದನ್ ಅವರ ಹುಟ್ಟು ಹಬ್ಬದಂದು ಕೆಪಿಸಿಸಿ ಕಾರ್ಯಾಧ್ಯಕ್ಷರಾದ ರಾಮಲಿಂಗಾರೆಡ್ಡಿರವರು ಅಭಿಮಾನಿಗಳ ಹಾಗೂ ಕಾರ್ಯಕರ್ತರ ಸಮ್ಮುಖದಲ್ಲಿ ಶುಭ ಕೋರಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಎಸ್.ಮನೋಹರ್, ಮಂಜುನಾಥ್,ಎ .ಆನಂದ್,ಎಲ್. ಜಯಸಿಂಹ ಸುಧಾಕರ್ ರಾಮಕೃಷ್ಣ ರವಿಶೇಕರ್,ಚಂದ್ರಶೇಖರ್, ಪ್ರಕಾಶ್, ನಿರಂಜನ್, ಪುಟ್ಟರಾಜು ಮುಂತಾದವರು ಉಪಸ್ಥಿತರಿದ್ದರು. ಇದೇ ವೇಳೆ ಜಿ.ಜನಾರ್ಧನ್ ರವರು ತಮ್ಮ ಜನ್ಮ ದಿನದ ಅಂಗವಾಗಿ ಅಂಧ ಮಕ್ಕಳಿಗೆ ಆರ್ಥಿಕ ನೆರವನ್ನು ನೀಡುವ ಮೂಲಕ ತಮ್ಮ ಸಮಾಜಮುಖಿ ಕಾರ್ಯದಿಂದಾಗಿ ಸಮಾಜಕ್ಕೆ ಪ್ರೇರಕರಾಗಿ ಎಲ್ಲರ ಪ್ರಶಂಸೆಗೆ ಪಾತ್ರರಾದರು.
0 Comments