ಕನ್ನಡಿಗರ ಸಾಹಿತ್ಯ ಮತ್ತು ಸಾಂಸ್ಕೃತಿಕ ಟ್ರಸ್ಟ್ (ರಿ) ಶ್ರೀ ಬುದ್ಧ ಬಸವ ಅಂಬೇಡ್ಕರ್ ಸಾಮಾಜಿಕ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನ (ರಿ) ಇವರ ಆಶ್ರಯದಲ್ಲಿ ಬರುವ ಜನವರಿ, 2022 ರಂದು ಅಥಣಿ ತಾಲೂಕಿನ ಚಮಕೇರಿಯಲ್ಲಿ ಲಿಂ : ರಾಮಗೌಡ ಬಸಗೌಡ ಬಿರಾದಾರ ಆರನೆಯ ಸ್ಮರಣಾರ್ಥವಾಗಿ ನಡೆಯುವ "ಅಪ್ಪನ ಜಾತ್ರೆ" 2021 ನೇ ಸಾಲಿನ ಪ್ರತಿಷ್ಠಿತ ಅಪ್ಪ ಪ್ರಶಸ್ತಿ ಪ್ರಕಟಗೊಂಡಿವೆ.
ಶೈಕ್ಷಣಿಕವಾಗಿ ಅರವಿಂದ ದೇಶಪಾಂಡೆ, ಕನ್ನಡಪರ ಅಶೋಕ ಚಂದರಗಿ, ಸಂಘಟನೆಯಲ್ಲಿ ಚಿದಾನಂದ ಸವದಿ, ಆಡಳಿತ ಅಶೋಕ ಚಲವಾದಿ, ಕಲೆಯಲ್ಲಿ ಪ್ರತಾಪ ಬಹುರೂಪಿ, ಸಮಾಜಸೇವೆಯಲ್ಲಿ ಮಹಾದೇವ ಧರಿಗೌಡರ, ರೈತಸಂಘಟನೆಯಲ್ಲಿ ಮಹಾದೇವ ಮಡಿವಾಳ, ಸಂಶೋಧನೆಯಲ್ಲಿ ರಾಧಾಕೃಷ್ಣ ಪಲ್ಲಕ್ಕಿ, ಸಾಹಿತ್ಯದಲ್ಲಿ ಡಾ. ವಿ ವಿ ಹಿರೇಮಠ ಸೇರಿದಂತೆ ಒಂಭತ್ತು ಜನ ಸಾಧಕರಿಗೆ ಜನವರಿ ತಿಂಗಳು 2022 ರಲ್ಲಿ ನಡೆಯುವ ಅಪ್ಪನ ಜಾತ್ರೆಯ ವೇದಿಕೆಯಲ್ಲಿ "ಅಪ್ಪ ಪ್ರಶಸ್ತಿ" ಪ್ರದಾನ ಸಮಾರಂಭವು ಜರಗುತ್ತಿದೆ ಎಂದು ಟ್ರಸ್ಟ್ ಕಾರ್ಯದರ್ಶಿ ಶ್ರೀಮತಿ ಭಾಗ್ಯವಂತಿ ಮಹಾದೇವ ಬಿರಾದಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
0 Comments