ಕಾಂಗ್ರೆಸ್ ಪಕ್ಷದವತಿಯಿಂದ ಬಸವನಗುಡಿ ಕ್ಷೇತ್ರದ ಉಸ್ತುವಾರಿಗಳು ಹಾಗೂ ವಿಧಾನ ಪರಿಷತ್ ಸದಸ್ಯರಾದ ಯು.ಬಿ.ವೆಂಕಟೇಶ್ ರವರು ಇವರೆವಿಗೂ 23 ಸಾವಿರಕ್ಕೂ ಅಧಿಕ ರೇಷನ್ ಕಿಟ್ ಗಳನ್ನು ಕೊವಿಡ್ ಲಾಕ್ ಡೌನ್ ನಿಂದ ಸಂಕಷ್ಟಕ್ಕೊಳಗಾಗಿದ್ದ ಬಸವನಗುಡಿ ಕ್ಷೇತ್ರದ ಜನತೆಗೆ ವಿತರಿಸಿದ್ದಾರೆ.ಈಗ ಶ್ರೀ,ಯು.ಬಿ.ವೆಂಕಟೇಶ್ ರವರು ಬಸವನಗುಡಿ ಕ್ಷೇತ್ರವನ್ನು ಕೊವಿಡ್ ಮುಕ್ತ ವಾಗಿಸಲು , ಕೊವಿಡ್ ಮುಕ್ತ ಬಸವನಗುಡಿ ಯೋಜನೆ ರೂಪಿಸಿದ್ದಾರೆ. ಕೊವಿಡ್-19,ಉಚಿತ ಲಸಿಕಾ ಆಭಿಯಾನವನ್ನು ಕಾಂಗ್ರೆಸ್ ಪಕ್ಷದ ಸಹಾಯ ಹಸ್ತ ಕಾರ್ಯಕ್ರಮದಡಿ ಆರಂಭಿಸಿದ್ದಾರೆ.
ಕಾರ್ಯಕ್ರಮದ ಉದ್ಗಾಟನೆಯನ್ನು, ಪರಮ ಪೂಜ್ಯ ಶ್ರೀ.ಶ್ರೀ.ಶ್ರೀ.ವಿಶ್ವೇಶ ತೀರ್ಥ ಪ್ರಸನ್ನ ಶ್ರೀ ಪಾದರು,ಪೇಜಾವರ ಮಠ. ತಮ್ಮ ಅಮೃತ ಹಸ್ತದಿಂದ ನೇರವೆರಿಸಲಿದ್ದಾರೆ.ಮತ್ತು ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರಾದ ಕೆ.ಎಂ.ನಾಗರಾಜ್ ರವರು ವಹಿಸಲಿದ್ದಾರೆ.
ದಿನಾಂಕ.4-9-2021. ಶನಿವಾರ

0 Comments