Ticker

6/recent/ticker-posts

Ad Code

Responsive Advertisement

ಅಂತರರಾಷ್ಟ್ರೀಯ ಲಯನ್ಸ್ ಸಂಸ್ಥೆ ಜಿಲ್ಲೆ 317 ಎಫ್ - ಕ್ಯಾಬಿನೆಟ್ ಸದಸ್ಯರಿಗೆ ಪ್ರಮಾಣವಚನ

ಬೆಂಗಳೂರು:-  ಅಂತರರಾಷ್ಟ್ರೀಯ ಲಯನ್ಸ್ ಸಂಸ್ಥೆ ಜಿಲ್ಲೆ 317 ಎಫ್ ಇಂದ ಏರ್ಪಡಿಸಿದ್ದ ಕ್ಯಾಬಿನೆಟ್ ಸದಸ್ಯರಿಗೆ ಪ್ರಮಾಣವಚನ ಬೋಧನಾ ಸಮಾರಂಭದಲ್ಲಿ ಸುಮಾರು 25 ಲಕ್ಷ ರೂಗಳ ಸೇವಾ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿತ್ತು.

 ಲಯನ್ ಜಿಲ್ಲಾ 317 ಎಫ್ ಕ್ಯಾಬಿನೆಟ್ 2021-22  ನ ಸಾಲಿಗೆ ಆಯ್ಕೆಯಾದ ಉಪ ಗೌರ್ನರ್ ಹಾಗೂ ಕ್ಯಾಬಿನೆಟ್ ಸದಸ್ಯರ ಪ್ರಮಾಣವಚನ ಸ್ವೀಕಾರ ಸಮಾರಂಭವನ್ನು ಬೆಂಗಳೂರಿನ ಅರ್. ಜಿ.ರಾಯಲ್ ಹೋಟೆಲ್ ನಲ್ಲಿ ಏರ್ಪಡಿಸಲಾಗಿತ್ತು.

 ಲಯನ್  ಅಂತರರಾಷ್ಟ್ರೀಯ ನಿರ್ದೇಶಕರಾದ ಲಯನ್ ಕೆ.ವಂಶಿಧರ್ ಬಾಬು ರವರು ಕ್ಯಾಬಿನೆಟ್ ಸದಸ್ಯರಿಗೆ ಪ್ರಮಾಣವಚನ ಬೋಧಿಸಿದರು. ಮುಖ್ಯ ಅತಿಥಿಗಳಾಗಿ ಮಾಜಿ ಅಂತರರಾಷ್ಟ್ರೀಯ ನಿರ್ದೇಶಕರಾದ ವಿ.ವಿ.ಕೃಷ್ಣಾ ರೆಡ್ಡಿ ಹಾಗೂ ಮಲ್ಟಿಪಲ್  ಅಧ್ಯಕ್ಷರಾದ ಲಯನ್ ಭಾನುಮೂರ್ತಿ ರವರು ಭಾಗವಹಿಸಿದ್ದರು.



 ಲಯನ್ ಜಿಲ್ಲಾ ಗವರ್ನರ್ ಸಿ.ಕೆ. ಮನೋಹರನ್ ನಂಬಿಯಾರ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.

ಈ ಸಮಾರಂಭದಲ್ಲಿ 34 ವಿದ್ಯಾರ್ಥಿಗಳಿಗೆ ತಲಾ 20 ಸಾವಿರ ರೂಗಳ ವಿದ್ಯಾರ್ಥಿವೇತನ, ಲ್ಯಾಪ್ಟಾಪ್ , ವೃದ್ಧಾಶ್ರಮಕ್ಕೆ ದೇಣಿಗೆ ಹಾಗೂ  ಕೆ. ಸಿ ಜನರಲ್ ಆಸ್ಪತ್ರೆಯ ರೋಗಿಗಳಿಗೆ  ಹಾಗೂ ಇತರರಿಗೆ 200 ಜನಕ್ಕೆ  ಪ್ರತಿದಿನ ಊಟದ ವ್ಯವಸ್ಥೆಯನ್ನು ಒಂದು ವರ್ಷಕಾಲ ಮಾಡುವ ಯೋಜನೆಗೆ ಚಾಲನೆ ನೀಡಲಾಯಿತು.

ಈ ಸಮಾರಂಭದಲ್ಲಿ ಜಿಲ್ಲಾ ಉಪ ಗೌರ್ನರ್ ಗಳಾದ ಬಿ.ಎಸ್. ರಾಜಶೇಖರಯ್ಯ, ಬಿ.ಎಸ್. ನಾಗರಾಜ್, ಪ್ರಸನ್ನ ಕೃಷ್ಣ,ವೀರಭದ್ರೇಗೌಡ, ರವಿಚಂದ್ರನ್, ವಿಜಯ ಕುಮಾರ್, ಅಜಿತ್ ಬಾಬು, ಸಿ. ಎಂ.ನಾರಾಯಣಸ್ವಾಮಿ, ರವಿ ನಾಯ್ಡು, ಸಿಂಹಶಾಸ್ತ್ರಿ, ಹಾಗೂ ಮಾಜಿ ರಾಜ್ಯಪಾಲರು, ಲಯನ್ ಸದಸ್ಯರು ಉಪಸ್ಥಿತರಿದ್ದರು.

Post a Comment

0 Comments

Ad Code

Responsive Advertisement