ಬಳ್ಳಾರಿ ಜುಲೈ 18.ಬಡ ಜನರಿಗೆ ಅನುಕೂಲವಾಗಲೆಂದು ಕಾಂಗ್ರೆಸ್ ಪಕ್ಷದ ಸರ್ಕಾರ ವಿದ್ದಾಗ ಮಾಜಿ ಮುಖ್ಯಮಂತ್ರಿಗಳಾಗಿದ್ದ ಸಿದ್ದರಾಮಯ್ಯ ನವರು ಆರಂಭಿಸಿದ್ದ ಮೋತಿ ವೃತ್ತದಲ್ಲಿರುವ ಈ ಇಂದಿರಾ ಕ್ಯಾಂಟನ್ ಸ್ಥಳಾಂತರ ಮಾಡಲು "ಬಿಜೆಪಿ ಪಕ್ಷದ ಬಳ್ಳಾರಿ ನಗರ ಶಾಸಕರು, ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರು ನಗರಾಭಿವೃದ್ಧಿ ಪ್ರಾಧಿಕಾರದ ಮೀಟಿಂಗ್ನಲ್ಲಿ ನಿರ್ಣಯ ಕೈಗೊಂಡಿರುವುದರ ವಿರುದ್ದ ದಿನಾಂಕ: 18.07.2021 ರಂದು ತೀವ್ರ ಪ್ರತಿಭಟನೆಯನ್ನು ಮೋತಿ ವೃತ್ತದಲ್ಲಿ ಇಂದಿರಾ ಕ್ಯಾಂಟೀನ್ ಮುಂಭಾಗದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ಜೆ.ಎಸ್.ಆಂಜನೇಯಲು ನೇತೃತ್ವವಹಿಸಿದ್ದ ಈ ಪ್ರತಿಭಟನೆಯಲ್ಲಿ ಮಾಜಿ ಮೇಯರ್ ಜಿ.ವೆಂಕಟರಮಣ, ಮಹಿಳಾ ಆಧ್ಯಕ್ಷರಾದ ಶ್ರೀಮತಿ ಪದ್ಮ, ಎಂ.ಎಸ್.ಮAಜುಳ, ಕುಮಾರಮ್ಮ, ಪಾಲಿಕೆ ಸದಸ್ಯರಾದ ರಾಮಾಂಜನೇಯಲು, ಜಬ್ಬರ್, ಕುಬೇರ, ಡಿ.ಸೂರಿ, ಬಿ.ಜಗನ್, ಬಿ.ರಾಜಶೇಖರ, ಡಿ ಸಿ ಸಿ ಪ್ರದಾನ ಕಾರ್ಯದರ್ಶಿ ವಿ.ಅರುಣ ಕುಮಾರ,, ಪ್ರಚಾರ ಸಮಿತಿ ನಗರ ಘಟಕ ಅಧ್ಯಕ್ಷರಾದ ಬೊಯಪಾಟಿ ವಿಷ್ಣುವರ್ಧನ್, ಕೆ.ಶ್ರೀನಿವಾಸ, ಬಿ.ಎಂ.ಪಾಟೀಲ್,ಮಾಜಿ ಪಾಲಿಕೆ ಸದಸ್ಯರಾದ ಪರ್ವೀನ ಬಾನು, ಹಿರಿಯ ಮುಖಂಡರಾದ ಗೋಪಿನಾಥ,,ಯುವ ಮುಖಂಡರಾದ ನಾಗಭೂಷಷಗೌಡ, ಸಂತೋಷಸ್ವಾಮಿ, ಶ್ರೀರಾಮ ರಾಜು, ಸಂಗನಕಲ್ ವಿಜಯಕುಮಾರ್ ಪೆದ್ದ ಯರ್ರಿಸ್ವಾಮಿ ಮುಂತಾದ ಮುಖಂಡರು ಉಪಸ್ಥಿತರಿದ್ದರು.

0 Comments