ಕರ್ನಾಟಕ ಚಲನಚಿತ್ರ ನಿರ್ದೇಶಕರ ಕಲ್ಯಾಣ ಸಮಿತಿಯು ಇಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರನ್ನು ಭೇಟಿ ಮಾಡಿದರು.
ಚಿತ್ರರಂಗಕ್ಕೆ ವಿಶೇಷವಾಗಿ ಕಿಟ್, ನೀಡಿ ವ್ಯಾಕ್ಸಿನೇಷನ್ ನೀಡಿದ್ದಕ್ಕೆ, ಸೇವಾಸಿಂಧು ಮೂಲಕ ಧನಸಹಾಯ ಮಾಡಿರುವುದಕ್ಕೆ, ಮತ್ತು ಚಿತ್ರಮಂದಿರಗಳ ತೆರಿಗೆ ರದ್ದು ಮಾಡಿರುವುದಕ್ಕೆ ಧನ್ಯವಾದಗಳನ್ನು ತಿಳಿಸಿದರು. ಅಧ್ಯಕ್ಷರಾದ ಡಾ.ವಿ.ನಾಗೇಂದ್ರ ಪ್ರಸಾದ್, ಉಪಾಧ್ಯಕ್ಷರಾದ ನಾಗೇಂದ್ರ ಮಾಗಡಿ, ವಿಕ್ಟರಿ ವಾಸು, ವೆಸ್ಲಿ ಬ್ರೌನ್, ಮಂಜು ಮಸ್ಕಲ್ ಮಟ್ಟಿ, ರಮೇಶ್ ಕೋಟೆ, ಅಶೋಕ್,ಆದತ್, ಸುನೀಲ್ ಮುಂತಾದ ನಿರ್ದೇಶಕರು ಉಪಸ್ಥಿತರಿದ್ದರು.

0 Comments