ಬಳ್ಳಾರಿ ಜುಲೈ 31.ಸಿರುಗುಪ್ಪ ತಾಲೂಕಿಗೆ ಮೂರುಬಾರಿ ಶಾಸಕರಾಗಿ ಹಿಂದುಳಿದ ತಾಲೂಕಿನ ಅಭಿವೃದ್ಧಿಗೆ ಮತ್ತು ಪಕ್ಷದ ಸಂಘಟನೆಗೆ ಶ್ರಮಿಸುತ್ತಿರುವ ಶಾಸಕ ಎಂ.ಎಸ್.ಸೋಮ ಲಿಂಗಪ್ಪನವರಿಗೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಯವರ ಸಚಿವ ಸಂಪುಟದಲ್ಲಿ ಸಚಿವ ಸ್ಥಾನ ನೀಡಬೇಕೆಂದು ಬಿ.ಜೆ.ಪಿ. ರಾಜ್ಯಾಧ್ಯಕ್ಷ ನÀಳೀನ್ ಕುಮಾರ್ ಕಟೀಲ್ರವನ್ನು ತಾಲೂಕ ಬಿಜೆಪಿಯ ವಿವಿಧ ಘಟಕಗಳ ಅಧ್ಯ ಕ್ಷರು ಮತ್ತು ಪದಾಧಿಕಾರಿಗಳು ಒತ್ತಾಯಿಸಿದರು.
ಸಿರುಗುಪ್ಪ ನಗರದಲ್ಲಿ ಬಿ.ಜೆ.ಪಿ. ಕಛೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಬಿ.ಜೆ.ಪಿ. ತಾ.ಅಧ್ಯಕ್ಷ ಪಂಪನಗೌಡ ಕೇವಲ ಕಾಂಗ್ರೇಸ್ ಮತ್ತು ಜೆಡಿಎಸ್ ಪಕ್ಷದವರೆ ಶಾಸಕರಾಗುತ್ತಿದ್ದ ಸಿರುಗುಪ್ಪ ಕ್ಷೇತ್ರದಲ್ಲಿ ಸೋಮ ಲಿಂಗಪ್ಪನವರು ಬಿಜೆಪಿ ಪಕ್ಷದಿಂದ ಸತತ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಹಿಂದುಳಿದ ತಾಲೂಕಿನ ಅಭಿವೃದ್ಧಿಗೆ ಸದಾ ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿದ್ದು, ತಾಲೂಕಿನ ಹಾಗೂ ಹೈದ್ರಬಾದ್ ಕರ್ನಾಟಕ ಅಭಿವೃದ್ಧಿಯ ದೃಷ್ಠಿಯಿಂದ ಮೂರು ಬಾರಿ ಶಾಸಕರಾಗಿ ಅನುಭವವುಳ್ಳ ಸೋಮಲಿಂಗಪ್ಪರಿಗೆ ಸಚಿವ ಸ್ಥಾನ ನೀಡುವ ಮೂಲಕ ಶೈಕ್ಷಣಿಕವಾಗಿ ಹಿಂದುಳಿದ ತಾಲೂಕಿನ ಅಭಿವೃದ್ಧಿಗೆ ಸರ್ಕಾರ ಒತ್ತು ನೀಡಬೇಕು ಎಂದರು.
ಈಗಾಗಲೇ ತಾಲೂಕಿನಲ್ಲಿ ಪಕ್ಷದ ಸಂಘಟನೆಯ ಮೂಲಕ ಗ್ರಾಮಪಂಚಾಯ್ತಿ ಯಿಂದ ಪ್ರಾರಂಭಗೊAಡು ಸ್ಥಳೀಯ ಸಂಸ್ಥೆಗಳಲ್ಲಿ ಬಿಜೆಪಿ ಪಕ್ಷದ ಧ್ವಜ ಹಾರಿಸುವ ಮೂಲಕ ಪಕ್ಷ ಸಂಘಟನೆಗೆ ಹಾಗೂ ತಾಲೂಕಿನ ರೈತರ ಹಿತ ದೃಷ್ಠಿಯಿಂದ ಶಾಸಕರಿಗೆ ನೂತನ ಸಚಿವ ಸಂಪುಟದಲ್ಲಿ ಸಚಿವ ಸ್ಥಾನ ನೀಡುವ ಮೂಲಕ ಇದುವರೆಗೂ ಸಿರುಗುಪ್ಪ ಕ್ಷೇತ್ರಕ್ಕೆ ದೊರೆಯದ ಸಚಿವ ಸ್ಥಾನ ನೀಡಿ ಅಭಿವೃದ್ಧಿಗೆ ಮುಂದಾಗುವAತೆ ಒತ್ತಾಯಿಸಿದರು.
ಈ ಸಮಧರ್ಭದಲ್ಲಿ ಪ್ರಧಾನ ಕಾರ್ಯದರ್ಶಿ ಬಂಡ್ರಾಳ್ ಮಲ್ಲಿಕಾರ್ಜುನ, ನಗರ ಘಟಕದ ಅಧ್ಯಕ್ಷ ಫ್ರೂಟ್ ಗಂಗಾಧರ, ಸಿರುಗುಪ್ಪ ಮಹಾಶಕ್ತಿ ಕೇಂದ್ರ ಅಧ್ಯಕ್ಷ ಬಿ.ಎನ್.ಕುಮಾರ್, ಅಲ್ಪಸಂಖ್ಯಾತರ ಮೋರ್ಚಾ ಅಧ್ಯಕ್ಷ ಜಬಿವುಲ್ಲಾ, ಎಸ್.ಸಿ. ಮೋರ್ಚಾ ಅಧ್ಯಕ್ಷ ದಿಗಂಬರಸ್ವಾಮಿ, ಎಸ್.ಟಿ.ಮೋರ್ಚಾ ಅಧ್ಯಕ್ಷ ಬಿ.ರಾಮನಾಯಕ, ಮಹಿಳಾ ಮೋರ್ಚಾ ಅಧ್ಯಕ್ಷೆ ಅನ್ನಪೂರ್ಣ, ಎಸ್.ಸಿ.ಮೋರ್ಚಾ ಜಿಲ್ಲಾ ಪ್ರಧಾನಕಾರ್ಯದರ್ಶಿ ಮೇಕೆಲಿ ವೀರೇಶ, ರೈತಮೋರ್ಚಾ ಅಧ್ಯಕ್ಷ ಹೆಚ್.ಸಿ.ರುದ್ರಮುನಿಗೌಡ, ಹಿಂದುಳಿದ ವರ್ಗಗಳ ಮೋರ್ಚಾದ ತಾ.ಅಧ್ಯಕ್ಷರು ಮತ್ತಿತರು ಉಪಸ್ಥಿತರಿದ್ದರು.

0 Comments