ಜುಲೈ 1 ಪತ್ರಿಕಾ ದಿನಾಚರಣೆಯ ಅಂಗವಾಗಿ ಕರ್ನಾಟಕ ಮಾಧ್ಯಮ ಅಕಾಡೆಮಿಯು ‘ಜನ ಸಾಮಾನ್ಯರ ಮನಸ್ಸುಗಳ ಮೇಲೆ ಮಾಧ್ಯಮಗಳ ಪರಿಣಾಮ’ ವಿಷಯದ ಕುರಿತಾಗಿ ಫೇಸ್ಬುಕ್ ಆನ್ಲೈನ್ ಕಾರ್ಯಕ್ರಮವನ್ನು ಜುಲೈ 1ರ ಬೆಳಿಗ್ಗೆ 10:30 ಕ್ಕೆ ಏರ್ಪಡಿಸಿದೆ. ಫೇಸ್ಬುಕ್ ಲಿಂಕ್ https://www.facebook.com/profile.php?id=100053176877356
ಕಾರ್ಯಕ್ರಮದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಜಂಟಿ ನಿರ್ದೇಶಕರಾದ ಶ್ರೀ ಡಿ.ಪಿ. ಮುರಳೀಧರ್, ಅಂಬೇಡ್ಕರ್ ಮೆಡಿಕಲ್ ಕಾಲೇಜಿನ ಪ್ರೊಫೆಸರ್ ಡಾ. ವಿಷ್ಣು ಎನ್ ಹಯಗ್ರೀವ ಹಾಗೂ ಪಬ್ಲಿಕ್ ಟಿವಿಯ ರಾಜಕೀಯ ವಿಭಾಗದ ಮುಖ್ಯಸ್ಥರು ಹಾಗೂ ವರದಿಗಾರರಾದ ಶ್ರೀ ಹೆಚ್.ಎಸ್. ರವೀಶ್ ಭಾಗವಹಿಸಲಿದ್ದಾರೆ.

0 Comments