ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಅತ್ಯುತ್ತಮ ಸಾಧನೆಗೈದ ಸರ್ಕಾರಿ ಅರ್ಹ 10 ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ 2020-21ನೇ ಸಾಲಿನ ರಾಜ್ಯ ಮಟ್ಟದ ಸರ್ವೋತ್ತಮ ಸೇವಾ ಪ್ರಶಸ್ತಿಯನ್ನು ರಾಜ್ಯ ಸರ್ಕಾರ ಪ್ರಕಟಿಸಿದೆ.
ರಾಜ್ಯ ಮಟ್ಟದ ಪ್ರತಿ ಪ್ರಶಸ್ತಿಯು 25,000/-ರೂ. ಪ್ರೋತ್ಸಾಹ ಧನ ಹಾಗೂ ಪ್ರಶಸ್ತಿ ಪ್ರಮಾಣ ಪತ್ರ ಒಳಗೊಂಡಿರುತ್ತದೆ. ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸರ್ಕಾರದ ಉಪ ಕಾರ್ಯದರ್ಶಿ ಆರ್. ಚಂದ್ರಶೇಖರ್, ಯಲಹಂಕ ವ್ಯಾಪ್ತಿಯ ದೊಡ್ಡಜಾಲಾ ಗ್ರಾಮಪಂಚಾಯತ್ ಅಭಿವೃದ್ಧಿ ಅಧಿಕಾರಿ ಗಂಗಾರಾಮ್, ದಾವಣಗೆರೆ ತಾಲ್ಲೂಕ ತಹಶೀಲ್ದಾರ್ ಬಿ.ಎನ್. ಗಿರೀಶ್, ಅಬಕಾರಿ ಇಲಾಖೆಯ ಕೇಂದ್ರ ಕಚೇರಿಯ ಉಪ ಆಯುಕ್ತರಾದ ಬಸವಲಿಂಗಯ್ಯ ಆರ್. ಹಿರೇಮಠ್, ಅಡ್ವೋಕೆಟ್ ಜನರಲ್ ಕಚೇರಿಯ ಪ್ರಥಮ ದರ್ಜೆ ಸಹಾಯಕ ಜಿ. ಹರ್ಷಾ, ಬೆಂಗಳೂರಿನ ಸಿ.ವಿ.ರಾಮನ್ ಸರ್ಕಾರಿ ಜನರಲ್ ಆಸ್ಪತ್ರೆಯ ಶುಶ್ರೂತಾಧಿಕಾರಿ ಹೆ.ಚ್.ಪಿ.ಹೇಮಾವತಿ, ವಿಜಯನಗರ ಜಿಲ್ಲೆಯ ಕೂಡ್ಲಗಿಯ ಡಿ.ವಿ.ಬಿ.ಡಿ.ಸಿ.ಒ ಕಚೇರಿಯಾ ಹಿರಿಯ ಆರೋಗ್ಯ ಸಹಾಯಕ ಎಂ. ಆಂಜನೇಯ, ಶಿವಮೊಗ್ಗ ಮೆಗ್ಸಾಸ್ ತರಬೇತಿ ಜಿಲ್ಲಾ ಆಸ್ಪತ್ರೆಯ ಶೂಶ್ರೂತ ಅಧೀಕ್ಷಕರಾದ ಚಂದ್ರಮತಿ ಎಂ. ಹೆಗ್ಗಡೆ, ಕೆ.ಎಸ್.ಆರ್.ಟಿ.ಸಿ ಕೇಂದ್ರ ಕಚೇರಿಯ ಹಿರಿಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಡಾ.ಟಿ.ಎಸ್. ಲತಾ ಹಾಗೂ ಉಡುಪಿ ಜಿಲ್ಲೆಯ ಮಣಿಪಾಲದ ಚಂದ್ರಶೇಖರ್ ನಾಯಕ್ ಅವರು ಪ್ರಶಸ್ತಿಗೆ ಭಾಜನರಾಗಿದ್ದಾರೆ.
0 Comments