Ticker

6/recent/ticker-posts

Ad Code

Responsive Advertisement

ತಂತ್ರಜ್ಞಾನ ಶಿಕ್ಷಣದಿಂದ ಮಾತ್ರ ಅಭಿವೃದ್ದಿ ಸಾಧ್ಯ

ಸುಭಾಶ್ ನಗರ ಬಿ.ಬಿ.ಎಂ.ಪಿ.ವಾಣಿಜ್ಯ ಸಂಕೀರ್ಣದಲ್ಲಿ ಯುವಕ ,ಯುವತಿಯರು ಉದ್ಯೋಗ ,ಶಿಕ್ಷಣದಲ್ಲಿ ಸರಿಯಾದ ಮಾರ್ಗದಲ್ಲಿ ಸಾಗಲು ತರಭೇತಿ ಸಂಸ್ಥೆ ಆರಂಭಿಸಲಾಗಿದೆ.ಇಂದು  ಮಯೂರ್ ಅಕಾಡೆಮಿ ಆಫ್ ಲರ್ನಿಂಗ್ ಅಂಡ್ ಕೆರಿಯರ್ ಸೆಂಟರ್  ಉದ್ಘಾಟನೆಯನ್ನು ಮಾಜಿ ಆಡಳಿತ ಪಕ್ಷದ ನಾಯಕರಾದ ಎಮ್.ಶಿವರಾಜುರವರು ,ಮಾಜಿ ಮಹಾನಗರ ಪಾಲಿಕೆ ಸದಸ್ಯರಾದ ಆರ್.ವಿ.ಯುವರಾಜ್ ರವರು ,ವ್ಯವಸ್ಥಾಪಕ ನಿರ್ದೇಶಕರಾದ ಮಂಜುನಾಥ್ ಮತ್ತು ಚಾರ್ಟೆಡ್ ಅಕೌಂಟೆಂಟ್ ಭರತ್ ಕುಮಾರ್ ರವರು ಲೋಕರ್ಪಣೆ ಮಾಡಿದರು.

ಎಮ್.ಶಿವರಾಜು ರವರು ಮಾತನಾಡಿ ಪಿ.ಯು.ಸಿ.ಮತ್ತು ಪದವಿ ಶಿಕ್ಷಣ ಪಡೆದವರು ಉದ್ಯೋಗ ಹಾಗೂ ಉನ್ನತ ವ್ಯಾಸಂಗ ಮಾಡಲು ಯುವ ಜನತೆಗೆ ಸರಿಯಾದ ಮಾರ್ಗದರ್ಶನ ನೀಡಿದರೆ ,ವಿಜ್ಞಾನ ತಂತ್ರಜ್ಞಾನ ಕ್ಷೇತ್ರದಲ್ಲಿ ಇನ್ನು ಹೆಚ್ಚು ಸಾಧನೆ ಮಾಡಬಹುದು. ಸ್ವಂತ ಉದ್ಯೋಗ ಮತ್ತು ಉದ್ಯೋಗ ಮಾಡಲು ಅವರಲ್ಲಿ ಇರುವ ಬುದ್ದಿ ಶಕ್ತಿಗ್ರಹಸಿ ಅವರನ್ನು ಸೃಧೃಡಗೊಳಿಸುವುದು ತರಭೇತಿ ನೀಡುವ ಮಹಾತ್ವಕಾಂಕ್ಷೆ ಇಟ್ಟುಕೊಂಡಿರುವ ಮಯೂರ್ ಅಕಾಡೆಮಿ ಯುವಕ ಮಿತ್ರರಿಗೆ ದಾರಿದೀಪವಾಗಿದೆ ಎಂದು ಹೇಳಿದರು .

ಆರ್.ವಿ.ಯುವರಾಜ್ ರವರು ಮಾತನಾಡಿ ದೇಶದಲ್ಲಿ ಚಾರ್ಟೆಡ್ ಅಕೌಂಟೆಂಟ್ ಗಳ ಅವಶ್ಯಕತೆ ಇದೆ ಮತ್ತು ಬೆಂಗಳೂರುನಗರ ಮಾಹಿತಿ ತಂತ್ರಜ್ಞಾನ ,ಸಾಫ್ಟ್ ವೇರ್ ಉದ್ಯಮದಲ್ಲಿ ವಿಶ್ವದ ಗಮನ ಸೆಳದಿದೆ ಯುವಕ ,ಯುವತಿಯರಿಗೆ ಮಾರ್ಗದರ್ಶನ ,ತರಭೇತಿ ನೀಡಿದರೆ ಉದ್ಯೋಗ ಅವಕಾಶ ದೊರುಕುತ್ತದೆ ಎಂದು ಹೇಳಿದರು.

Post a Comment

0 Comments

Ad Code

Responsive Advertisement