ಕೊರೊನಾ ಪ್ರಕರಣಗಳು ಏರಿಕೆಯಾಗುತ್ತಿದ್ದು, ಕೊರೊನಾ ನಿಯಂತ್ರಣಕ್ಕೆ ಕೆಲವು ನಿರ್ಬಂಧಗಳನ್ನು ಹೇರಲಾಗುತ್ತಿದೆ. ಏಪ್ರಿಲ್ 11ರಿಂದ ಏಪ್ರಿಲ್ 30ರವರಗೂ ಯಾವುದೇ ಆರಾಧನಾ ಸೇವೆಗಳನ್ನು ಆಯೋಜಿಸದಂತೆ ಹಾಗೂ ಭಾನುವಾರದ ಹೊತ್ತು ಪ್ರಾರ್ಥನೆಗೆ ಚರ್ಚ್ಗಳನ್ನು ತೆರಯುವಂತೆ ಕರ್ನಾಟಕ ಕೇಂದ್ರ ಡಯಾಸಿಸ್ ಸೂಚಿಸಿದೆ. ಈ ಕುರಿತು ಪತ್ರ ಬರೆದಿರುವ ಕೇಂದ್ರ ಡಯಾಸಿಸ್, "ದೇಶದಲ್ಲಿ ಕೊರೊನಾ ಎರಡನೇ ಅಲೆ ಆರಂಭವಾಗಿದೆ. ಈ ಸೋಂಕು ಅತಿ ವೇಗವಾಗಿ ತಗುಲುತ್ತಿದ್ದು, ಈಗಾಗಲೇ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೋಂಕಿಗೆ ತುತ್ತಾಗಿದ್ದಾರೆ. ಕೊರೊನಾ ಹರಡುವಿಕೆ ತಡೆಯಲು ಮುಂಜಾಗ್ರತಾ ಕ್ರಮವನ್ನು ತೆಗೆದುಕೊಳ್ಳಬೇಕಿದೆ" ಎಂದು ಉಲ್ಲೇಖಿಸಿದೆ.
30ರವರೆಗೂ ಆರಾಧನಾ ಸೇವೆಯನ್ನು ಆಯೋಜಿಸಬಾರದು. ಭಕ್ತರಿಗೆಂದು ಆನ್ಲೈನ್ ಆರಾಧನಾ ಸೇವೆ ಆರಂಭಿಸಿ. ಭಾನುವಾರ ಸಾಮೂಹಿಕ ಪ್ರಾರ್ಥನೆಗಲ್ಲದೇ ವೈಯಕ್ತಿಕ ಪ್ರಾರ್ಥನೆಗೆ ಅವಕಾಶ ನೀಡಬೇಕು. ಚರ್ಚ್ಗಳ ಸ್ಯಾನಿಟೈಸೇಷನ್, ಮಾಸ್ಕ್ ಧರಿಸುವಿಕೆಯಂಥ ಕ್ರಮಗಳನ್ನು ಕೈಗೊಳ್ಳಬೇಕು ಎಂದು ತಿಳಿಸಿದೆ.ಮದುವೆ, ಅಂತ್ಯಸಂಸ್ಕಾರದಂಥ ಕಾರ್ಯಗಳಿಗೆ 50ಕ್ಕಿಂತ ಹೆಚ್ಚು ಜನ ಸೇರುವಂತಿಲ್ಲ. ಈ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಇಲ್ಲದಿದ್ದರೆ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಲಾಗಿದೆ.

0 Comments